ಕೊರತೆಯೆ? ಎನಗೆ?

ಕೊರತೆ ಒಂದಿಲ್ಲ
ಓ!! ಶೃತಿಯು ಸ್ತುತಿಗೈದ ಭಗವನ್,
ಕೊರತೆ ಒಂದೂ ಇಲ್ಲ.
ಕೊರತೆ ಒಂದೂ ಇಲ್ಲ ಓ ಗೋವಿಂದಾ..

ಕಣ್ಣಿಗೆ ಕಾಣದೊಲ್ ನಿಂತಿರುವೆ ಓ! ಕೃಷ್ಣಾ
ನೀಂ ಕಣ್ಣಿಗೆ ಬೀಳದೊಡೆ ಯೇನ್? ಎನಗೆ
ಕೊರತೆ ಒಂದೂ ಇಲ್ಲ.

ಬೇಡಿದೆಲ್ಲಮುಂ ಈವ ವೆಂಕಟೇಶ ನೀನಿರಲು
ಬೇಡಿಕೆ ಎನದು ಏನಿರ್ಪುದಯ್ಯಾ?
ಓ!! ಶೃತಿಯು ಸ್ತುತಿಗೈದ ಭಗವನ್,
ಬೆಟ್ಟವೇರಿ ನಿಂತ ಓ! ಗೋವಿಂದಾ!!
ಎನಗೆ ಒಂದೂ ಕೊರತೆ ಇಲ್ಲಯ್ಯಾ.

ತೆರೆಯ ಮರೆಯೊಳ್ ನಿಂತಿರುವೆ ಅಯ್ಯಾ ನೀನು
ವೇದವ ಬಲ್ಲ ಜ಼ಾನಿಗಳುಂ ಮಾತ್ರಮೇ ನಿನ್ನ ಕಾಣ್ಪಾರು
ದರುಶನಮಾಗದೊಡೆ ಏನ್, ಎನಗೆ
ಕೊರತೆಯೆ? ಒಂದಿಲ್ಲಾ!!
ಓ! ಎಲ್ಲ ಬಲ್ಲಾತ ಭಗವಂತ ಗೋವಿಂದ ನೀನಿರಲ್
ಕೊರತೆಯೆ? ಎನಗೆ?

ಬೆಟ್ಟವನೇರಿ ನೀ ನಿಂತೆ ಅಯ್ಯಾ..
ಕಲ್ಲಾಗಿ ನಿಂತೆ
ನೀಂ ಬೆಟ್ಟಮೇರಿ ಕಲ್ಲಾಗಿ ನಿಂತೊಡೆ
ಎನಗೆ ಏನ್? ಕೊರತೆ ಒಂದೂ ಇಲ್ಲಾ!!

ಕಲಿಯುಗದೊಳ್ ಕಲ್ಲಾಗಿ ನೆಲೆಸಿದೆ
ದೇವಾಲಯದೊಳ್ ಬಂಧಿಯಾದೆ.
ಹೀಗಾದರೂ ಎನಗೆ ಒಂದೂ ಕೊರತೆಯಿಡದೆ
ನೀಗಿಸಿದೆ.

ಭಕ್ತರ ಬಂಧವ ನೀಗಿಸೋ ಪರಮಾತ್ಮ.
ನೀಂ ಯೆಂತು ಬೇಡಿಕೆ ತಿರಸ್ಕಾರಮಂ ಮಾಳ್ಪೆ?
ನಿನ್ನ ಹೃದಯದೊಳ್ ನೆಲೆಸಿರ್ಪಳ್ ಆ ಕರುಣೆಯ ಕಡಲ್
ಎನ್ನಾ ಮಾತೆ ಲಕುಮಿ

ಇಂತಿರಲ್ ನನಗೆ ಯೇಂ ಕೊರತೆ? ಚಿಂತೆ? ಬೇಸರಿಕೆ?
ಒಂದೂ ಇಲ್ಲ!!
ಓ! ಶೃತಿಯು ಸ್ತುತಿಗೈದ ಭಗವನ್,
ಗೋವಿಂದಾ! ವೆಂಕಟೇಶಾ! ಕರುಣಾ ಸಾಗರ!!
ಕೊರತೆ ಎನಗಿಲ್ಲಯ್ಯಾ!!

Posted by Srik 2:44 PM  

1 Comment:

  1. Anonymous said...
    Chennagide saar,
    Nimmadu ee blog irodu gotte iralilla

Post a Comment